ಎ ಫ಼್ರೇಂ ಟು ಫ಼್ರೇಂ ಮೂವೀಸ್ ಲಾಂಛನದಲ್ಲಿ ನಾಗರಾಜು, ರಘುರಾಜು ಅವರು ನಿರ್ಮಿಸಿರುವ, ಸುರೇಶ್ಬಾಬು, ಗಂಗಾಧರ್ ಅವರ ಸಹ ನಿರ್ಮಾಣವಿರುವ ‘ಕೊಳ್ಳೇಗಾಲ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ವೆಂಕಟೇಶ್ ದಿಕ್ಷಿತ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರವಿ ಸುವರ್ಣ ಹಾಗೂ ಸಂದೀಪ್ ಹಂಚಿನ್ ಅವರ ಛಾಯಾಗ್ರಹಣವಿದೆ. ಎ.ಟಿ.ರವೀಶ್ ಸಂಗೀತ ನಿರ್ದೇಶನ, ಸುರೇಶ್ ಸಂಕಲನ, ಥ್ರಿಲ್ಲರ್ ಮಂಜು, ಮಾಸ್ಮಾದ ಸಾಹಸ ನಿರ್ದೇಶನ ಹಾಗೂ ಬಾಬುಖಾನ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ವೆಂಕಟೇಶ್ ದಿಕ್ಷಿತ್, ಕಿರಣ್ ಗೌಡ, ಧರ್ಮತೇಜ್, ದೀಪಗೌಡ, ಸುಚೀಂದ್ರ ಪ್ರಸಾದ್, ಶ್ರೀನಿವಾಸ್, ಮೈಕೋ ನಾಗರಾಜ್, ಬ್ಯಾಂಕ್ ಜನಾರ್ದನ್, ಕರಿಸುಬ್ಬು, ಆಲಿಶಾ ಮುಂತಾದವರಿದ್ದಾರೆ.